ಬಳಿಗಾರರ ಆಧುನಿಕ ವಚನಗಳು
-ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ
‘ನುಡಿನೆದರು’ ಬಿ.ಬಿ.ಬಳಿಗಾರ ಅವರ ಆಧುನಿಕ ವಚನಗಳ ಸಂಕಲನ.ವಚನಗಳು ಸರಳ ಮತ್ತು ಸುಲಭ ನಿರೂಪಣೆಯಿಂದ ಯಾರ ನೆರವಿಲ್ಲದೆಯೂ ಅರ್ಥೈಸಿಕೊಳ್ಳಬಹುದಾದ ರಚನೆಗಳು.ವಚನಗಳ ಸಾರ್ಥಕತೆ ಇರುವುದು ಅವು ನಮ್ಮಲ್ಲಿ ಉಂಟು ಮಾಡುವ ಮಾನವೀಯ ಫಲಿತಗಳಲ್ಲಿ.ನಮ್ಮ ಹಿಂದಿನ ವಚನಕಾರರು ಸಾಹಿತ್ಯ ಬರೆಯಬೇಕೆಂದು ಹೊರಟವರಲ್ಲ. ಸಾಹಿತ್ಯದಿಂದ ಕೀರ್ತಿ,ಹೆಸರು ಪಡೆಯಬೇಕೆಂದೂ ಹೊರಟವರಲ್ಲ.ಅವರ ಮುಖ್ಯ ಉದ್ದೇಶ ಮನುಷ್ಯರ ನಡೆ ನುಡಿಯಲ್ಲಿ ಸತ್ಯ ,ಪ್ರಾಮಾಣಿಕತೆ, ಶ್ರದ್ದೆ,ಕಾಯಕ ನಿಷ್ಠೆ ಒಡಮೂಡಿಸುವದಾಗಿತ್ತು.ಜೊತೆಗೆ ತಮ್ಮ ರಚನೆಗಳ ಮೂಲಕ ಸಮಾಜಮುಖಿ ಚಿಂತನೆಯನ್ನು ವ್ಯಾಪಕಗೊಳಿಸುವದಾಗಿತ್ತು. ನಮ್ಮ ಹಿಂದಿನ ವಚನಕಾರರು ಜನಸಾಮಾನ್ಯರ ನೆಲೆಯಿಂದ ಉದಿಸಿ ಬಂದವರು.ತಮ್ಮ ಕಾಯಕದೊಂದಿಗೆ ಗುರುತಿಸಿಕೊಂಡವರು.ಯಾವ ಬೇಧ ಭಾವವಿಲ್ಲದೇ ಸಿರಿವಂತ-ಬಡವ,ದೊಡ್ಡವ-ಸಣ್ಣವ, ಕಪ್ಪು-ಬಿಳಿಯ,ಮೇಲ್ಜಾತಿ-ಕೆಳಜಾತಿ ಎಂಬ ಮಾನವ ವಿರೋಧಿ ತಾರತಮ್ಯವನ್ನು ಮೀರಿ ಬರೆದವರು,ಬೆರತವರು ಹಾಗೂ ಬೆಳೆದವರು.ನಮ್ಮ ವಚನಕಾರರು ಅವರು ಬರೆದ ಅಂದಿನ ರಚನೆಗಳು ಇಂದು ಕನ್ನಡ ಸಾಹಿತ್ಯದ ಶ್ರೇಷ್ಠತೆಯ ಮಾದರಿಗಳಾಗಿವೆ.ಜಗತ್ತಿನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಏನು ? ಎಂಬ ಪ್ರಶ್ನೆಗೆ ವಚನಗಳೇ ಉತ್ತರಗಳಾಗಿವೆ. ಇಂಥ ಮಾನವೀಯ ನೆಲೆಯ ರಚನೆಗಳನ್ನು ನಮಗೆ ಧಾರೆ ಎರೆದ ನಮ್ಮ ವಚನಕಾರರ ನಡೆಗೆ ನಮ್ಮ ಋಣವನ್ನು ತೀರಿಸುವದಾದರೆ ಅವುಗಳ ಸಂದೇಶವನ್ನು ಬದುಕಿನಲ್ಲಿ ನಾವೂ ಅಳವಡಿಸಿಕೊಂಡು ಇತರರಿಗೆ ಬಿತ್ತರಿಸಬೇಕಾಗಿದೆ.
ಇವತ್ತು ಆಧುನಿಕ ವಚನಕಾರರು ತಮ್ಮ ರಚನೆಗಳ ಕೃಷಿ ಆರಂಭಿಸಿದ್ದಾರೆ.ವಚನಕಾರರು ಅಂಕಿತವನ್ನಿಟ್ಟುಕೊಂಡು ಬರೆಯುವಂತೆ ಇವತ್ತಿನ ನಮ್ಮ ಕಾಲದ ಆಧುನಿಕ ವಚನಕಾರರೂ ಅಂಕಿತವನ್ನಿಟ್ಟುಕೊಂಡು ಬರೆಯುತ್ತಿದ್ದಾರೆ. ವಚನಗಳು ಒಂದು ಬಗೆಯಲ್ಲಿ ನಿರಂತರ ಮತ್ತು ಚಲನಶೀಲತೆಯ ಸಂಕೇತಗಳಾಗಿವೆ, ಹಾಗಾಗಿಯೇ ಯಾವ ಕಾಲಕ್ಕೂ ವಚನ ರಚನೆ ನಿಲ್ಲುವುದಲ್ಲ.ನಮ್ಮ ಆಧುನಿಕ ವಚನಕಾರರ ಸಾಲಿನಲ್ಲಿ ನಮ್ಮ ಯುವ ಕವಿ ಬಿ.ಬಿ.ಬಳಿU್ಫರ ಅವರು ಒಬ್ಬರು.ಅವರದೊಂದು ವಿಶೇಷ ನಡೆ, ವಿಶೇಷ ನುಡಿ.ಅವರ ನುಡಿ ನೆದರು ಕೃತಿಯು ಆಧುನಿಕ ವಚನಗಳ ರಚನೆಯ ಸಂದರ್ಭದಲ್ಲಿ ಒಂದು ವಿನೂತನ ಮಾದರಿಯನ್ನು ಹುಟ್ಟು ಹಾಕಿದೆ.ಕನ್ನಡದ ಶಬ್ದ ಚಮತ್ಕಾರಿಕೆ, ಪದ ಜೋಡನೆ,ನುಡಿಗಟ್ಟು ,ನಾಣ್ನುಡಿ, ಅರ್ಥ-ಭಾವಾರ್ಥ ಲಯಗಾರಿಕೆಯಿಂದ ಇಲ್ಲಿನ ಎಲ್ಲ ವಚನಗಳೂ ವಿಶಿಷ್ಟವೆನ್ನಿಸುತ್ತಿವೆ.
’ರಟ್ಟ ಮಂಡಲವಾಸ ಕವಿಕುಮಾರ ಬಸವ’ ಅಂಕಿತದಲ್ಲಿ ಬರೆಯತ್ತಿರುವ ಬಿ.ಬಿ.ಬಳಿಗಾರ ಅವರು ಆಧುನಿಕ ವಚನಗಳಲ್ಲಿ ತುಂಬಾ ಗಟ್ಟಿಯಾದ ರಚನೆಗಳನ್ನು ನೀಡಿದ್ದಾರೆ.
ಜಾಣ-ತಾಣಗಳ
ಜ್ಞಾನದ ಜಂಭದಲಿ /ಮಾನವ
ಬಳಸಿ ಬಗೆಯದ ಜಲವಾಗಬೇಡೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಬದುಕಿನಲ್ಲಿ ಕಂಡುಕೊಳ್ಳುವ ವಿರೋಧಾಭಾಸಗಳಲ್ಲಿ ಸಂಯಮದ ಮತ್ತು ವರ್ಣವಿಲ್ಲದ ನಡೆಯಲ್ಲಿ ಮಾನವ ರೂಪಿಸಿಕೊಳ್ಳಬೇಕಾದ ನೀತಿಯನ್ನು ಕವಿ ಸಾರಿದ್ದಾರೆ.ಬಳಕೆಗೆ ಸಲ್ಲುವ ಜಲದ ಗುಣವನ್ನು ಬದುಕಿಗೆ ಸಲ್ಲುವ ಗುಣಕ್ಕೆ ಕವಿ ಸಮೀಕರಿಸಿದ್ದಾರೆ.
ಮ್ಯಾಲ-ಕೆಳಗಳ
ಅಸಮತೆಯ ಕೆಂಡದಲ್ಲಿ /ಮಾನವ
ಕಪ್ಪು ಬಿಳಿ ಚರ್ಮದ ಮರ್ಮವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ
ಮೇಲು ಕೀಳುಗಳ ಅಸಮಾನತೆಯ ಪರಿಯಲ್ಲಿ ವರ್ಣಬೇಧ ಉಂಟುಮಾಡುವ ಅಪಾಯದ ಸೂಚನೆಯನ್ನು ಕವಿ ನೀಡಿದ್ದಾರೆ.ಸಮಾನತೆಯ ತತ್ವವನ್ನು ಪ್ರತಿಷ್ಠಾಪಿಸುವ ಸರಳತೆ ಇಲ್ಲಿದೆ.
ಅಕ್ಕ ಪಕ್ಕದ
ಅಕ್ಕರೆಯ ಬದುಕಿನಲಿ /ಮಾನವ
ಪಕ್ವವಾದ ಮನದಿಳೆಯಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಸಹಬಾಳ್ವೆಯ ಸಂದೇಶವನ್ನು ಸಾರುವ ಈ ವಚನ ಮನುಷ್ಯನ ಬದುಕಿನ ಪಕ್ವತೆಗೆ ಕೂಡಿ ಬಾಳುವ ಕೂಡಿ ಉಣ್ಣುವ ಅಗತ್ಯತೆಯನ್ನು ಮನಗಾಣುವುದರೊಂದಿಗೆ ನೆರೆಹೊರೆಯವರೊಂದಿಗೆ ಹೊರೆಯಾಗಿರಬೇಡ ಎಂಬ ನೀತಿ ಸಾರುತ್ತದೆ.
ಹಾಲು-ಪಾಲುಗಳ
ಕಿಚ್ಚಿನ ಕೆಸರಾಟದಲಿ/ ಮಾನವ
ಪಾಲನೆರೆಯುವ ಗಿಡಕಳ್ಳಿಯಾಗಬೇಡೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಜೀವನ ಕಟ್ಟಿಕೊಳ್ಳುವ ದಿಸೆಯಲ್ಲಿ ಬಂದೆರಗುವ ನೋವು ನಲಿವುಗಳ ಸಂದರ್ಭಗಳಲ್ಲಿ ಮಾನವ ಸಂಸ್ಕಾರಗೊಳ್ಳುವ ಹಾಲಾಗಬೇಕೆ ಹೊರತು ಕಳ್ಳಿ ಹಾಲಾಗಬಾರದು ಎಂದು ಸಾರಿದ್ದಾರೆ.
ಮರ-ವರಗಳ
ಮೃತಿಕೆಯ ಸಿರಿಯಲ್ಲಿ /ಮಾನವ
ಸಾಲುಮರದ ತಾಯಿ ತಿಮ್ಮಕ್ಕನಾಗೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಸಾಲು ಮರಗಳನ್ನು ಹಚ್ಚಿ ಮಾದರಿಯಾದ ಸಾಲುಮರದ ತಿಮ್ಮಕ್ಕನ ಆದರ್ಶವನ್ನು ಕವಿ ನೆನಪಿಸುವುದರೊಂದಿಗೆ ಮರಗಳ ಸಿರಿಯಲ್ಲಿ ಬದುಕು ಕಟ್ಟಿಕೊಳ್ಳಲು ಆಶಿಸುತ್ತಾರೆ.
ರಟ್ಟೆ ತಟ್ಟೆಗಳ
ಮೇಲಣ ಆಪೋಶನದಲ್ಲಿ/ಮಾನವ
ಮಡಗಿದ ಶರಣರ ಕಾಯಕವಿದೆ ಎಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಕಾಯಕದ ಮಹತಿಯನ್ನು ಸಾರುವ ಈ ವಚನವು ಶ್ರಮ ಸಂಸ್ಸøತಿಯ ಹಿರಿಮೆಯನ್ನು ಎತ್ತಿ ಹಿಡಿದಿದೆ.
ರಟ್ಟೆ ತಟ್ಟೆಗಳ ಪದಗಳಲ್ಲಿಯೇ ಶ್ರಮ ಮತ್ತು ಉಪಭೋಗದ ಆಶಯವಿದೆ. ಶರಣರ ಕಾಯಕದ ಮಾದರಿ ಇಂದೂ ನಮ್ಮ ಅಗತ್ಯವಾಗಿದೆ. ದುಡಿಯದೇ ಏನನ್ನೂ ಬಯಸಬಾರದು,ದುಡಿಮೆಯೇ ಬದುಕಿನ ಸತ್ಯವಾಗಬೇಕೆಂಬ ಆಶಯ ಈ ವಚನ ಹೊತ್ತಿದೆ.
ಬಿಸಿ-ತಂಪುಗಳ
ತರಗಲೆಯ ಚಕ್ರದಲಿ / ಮಾನವ
ಕಾಲನ ಕಾಲಚಕ್ರದ ಧರ್ಮವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಬಿಸಿ-ತಂಪು,ನೆರಳು-ಬೆಳಕು,ನೋವು-ನಲಿವು,ಸುಖ-ದುಃಖ ಇವೆಲ್ಲ ಕಾಲನ ನಡೆಯಲ್ಲಿ ಚಕ್ರದ ಗುರುತುಗಳು.ತರಗಲೆಯಂತೆ ಉದುರಿ ಹೋಗುವ ಮನುಷ್ಯ ಜೀವನದಲ್ಲಿ ಬಂದೊದಗುವ ಇಂಥ ಆಕಸ್ಮಿಕಗಳಿಗೆ ಕೊನೆ ಎಲ್ಲಿದೆ? ಇಂಥ ಚಿಂತನೆಗಳನ್ನು ವಚನ ತೂರಿಬಿಡುತ್ತದೆ.
ತಿಂಡಿ-ತಿನಿಸುಗಳ
ಕ್ರಮದ ಬಳಕೆಯಲಿ / ಮಾನವ
ಪುರಾಣದ ಬಕನಳಿಯಬೇಕೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಮನುಷ್ಯನ ಆರೋಗ್ಯವು ಆಹಾರ ಮತ್ತು ಅದರ ಕ್ರಮದ ಮೇಲೆ ನಿಂತಿದೆ.ತಿಂಡಿ ತಿನಿಸುಗಳ ಬಳಕೆಯಲ್ಲಿ ಹಿತ ಮಿತವಿರಬೇಕೆಂಬ ಆಶಯ ಈ ವಚನ ಬಿಂಬಿಸುತ್ತದೆ.ಪುರಾಣ ಕಾಲದ ಬಕಗಳಿಯಬೇಕೆಂಬಲ್ಲಿ ಆರೋಗ್ಯದ ಸೂತ್ರ ಅಡಗಿದೆ.
ತಾಗು- ಬಾಗುಗಳ
ಘನದ ನಡಿಗೆಯಲಿ / ಮಾನವ
ಸದಾಶಿವನಿಗೊಲಿದ ಸದುವಿನಯವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ವಿನಯ ಮತ್ತು ಸಜ್ಜನಿಕೆಗಳು ಮನುಷ್ಯನನ್ನು ದೊಡ್ಡವರನ್ನಾಗಿ ಮಾಡುತ್ತವೆ.ಮತ್ತು ತನ್ನ ಆರೋಗ್ಯವನ್ನು ಆ ಮೂಲಕ ಕುಟುಂಬದ ಮತ್ತು ಸಮಾಜದ ಆರೋಗ್ಯವನ್ನೂ ಕಾಯುತ್ತದೆ.ಸದಾಶಿವನಿಗೆ ಒಲಿದ ಸದುವಿನಯವನ್ನು ಮಾನವ ಹೊಂದಬೇಕೆಂಬ ಕಳಕಳಿ ಇಲ್ಲಿದೆ.
ಹೀಗೆ ಬದುಕಿನ ಸಾರ್ಥಕತೆಯನ್ನು ನಿರೂಪಿಸುವ ಇಲ್ಲಿನ ವಚನಗಳು ತುಂಬಾ ಮೌಲಿಕವಾಗಿವೆ.ಕವಿ ಬಿ.ಬಿ.ಬಳಿಗಾರ ಅವರು ತಮ್ಮ ವಚನಗಳ ಮೂಲಕ ಹೊಸ ಹೊಸ ಶಬ್ದಗಳ ಪ್ರಯೋಗ ಮಾಡಿದ್ದಾರೆ,ಇಂಥ ಪ್ರಯೋಗಗಳಿಂದ ಕನ್ನಡ ಶಬ್ದ ಭಂಡಾರವನ್ನು ವಿಸ್ತರಿಸುವ ಕೆಲಸ ನಡೆದಿದೆ.
ಬಳಿಗಾರರ ವಚನಗಳು ಶೈಲಿ,ರೂಪ,ಪದಜೋಡನೆ,ಅರ್ಥವಂತಿಕೆಯಿಂದ ಗುರುತಿಸಿಕೊಳ್ಳುತ್ತವೆ. ಆದಿ ಪ್ರಾಸ,ಅಂತ್ಯಪ್ರಾಸಗಳಿಂದ ಕೂಡಿದ ಬಹಳಷ್ಟು ವಚನಗಳು ಲಯಗಾರಿಕೆಗೆ ಹತ್ತಿರವಾಗಿವೆ. ಕೆಲವಡೆ ರಚನೆ ಕ್ಲಿಷ್ಟವಾಗಿ ಕಂಡರೂ ಅವು ಸ್ಪುರಿಸುವ ಅರ್ಥದಿಂದ ಹತ್ತಿರವಾಗುತ್ತವೆ.ಶಬ್ದಗಳ ಹುಡುಕಾಟದಲ್ಲಿ ಸೋಲುವ ಅರ್ಥದ ಭಾವ ತುಂಬಿಕೊಳ್ಳುವ ಪರಿಯಲ್ಲಿ ಕವಿಯ ಯತ್ನ ಸಾಲದಾಗುತ್ತದೆ. ಒಟ್ಟಾರೆಯಾಗಿ ಬಳಿಗಾರರ ವಚನಗಳು ದ್ವಿರುಕ್ತಿ,ಜೋಡು ನುಡಿ ,ನುಡಿಗಟ್ಟುಗಳ ವಿಶಿಷ್ಟ ಹೆಣಿಕೆಯಿಂದ ರಚನೆಯಾಗಿ ಕನ್ನಡ ಆಧುನಿಕ ವಚನಗಳ ಸಾಲಿಗೆ ಹೊಸ ಬೆಳೆಯನ್ನು ನೀಡಿವೆ.
ಅಧ್ಯಾಪಕರಾಗಿ ಮಕ್ಕಳಿಗೆ ಪಾಠ ಮಾಡುತ್ತ ಆಧುನಿಕ ವಚನಗಳ ಮೂಲಕ ಕನ್ನಡ ಸಾರಸ್ವತ ಲೋಕದ ಉಡಿತುಂಬುತ್ತಿರುವ ಬಳಿಗಾರ ಅವರು ಅಭಿನಂದನಾರ್ಹರು.ದೇಸಿ ನೆಲೆಗಟ್ಟಿನಲ್ಲಿ ತನ್ನ ಭಾಷೆಯ ಕಸುವನ್ನು ವಚನ ರಚನೆಗಳಲ್ಲಿ ತುಂಬಿಕೊಟ್ಟು ಒಂದು ಸಾರ್ಥಕ ಕಾರ್ಯವನ್ನು ಕವಿ ಮಾಡಿದ್ದಾರೆ.ಅಲ್ಲಲ್ಲಿ ಅನುಭಾವದ ಸೆಳಕುಗಳು, ಬಳಕೆಗೆ ಸಿಕ್ಕುವ ಪದಗಳು, ಚಮತ್ಕಾರಿಕೆಯ ಅರ್ಥ ಬಿಗಿತನ, ಪರಂಪರೆಯ ಸೆಳಕುಗಳು ,ಪದ ಸರಿಜೋಡಿಸುವ ತಂತ್ರಗಾರಿಕೆ ಮೊದಲಾದವುಗಳಿಂದ ನುಡಿ ನೆದರು ಕೃತಿಯ ರಚನೆಯ ಆಧುನಿಕ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಜೋಡು ಪ್ರಾಸ ಪದಗಳ ಮೋಡಿ ಮಾಡಿ ವಚನ ಕಟ್ಟಿಕೊಟ್ಟ ಬಳಿಗಾರ ಅವರನ್ನು ಅಭಿನಂದಿಸುತ್ತಾ ಅವರ ಕಾವ್ಯ ಕೃಷಿ ಮುಂದುವರಿಯಲಿ, ಅವರ ಕೃತಿಗಳನ್ನು ಓದುವ ಬಳಗ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಮುನ್ನುಡಿಯ ಈ ಸಾಲುಗಳಿಗೆ ವಿರಾಮ ಹೇಳುತ್ತೇನೆ.
-ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ
-ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ
‘ನುಡಿನೆದರು’ ಬಿ.ಬಿ.ಬಳಿಗಾರ ಅವರ ಆಧುನಿಕ ವಚನಗಳ ಸಂಕಲನ.ವಚನಗಳು ಸರಳ ಮತ್ತು ಸುಲಭ ನಿರೂಪಣೆಯಿಂದ ಯಾರ ನೆರವಿಲ್ಲದೆಯೂ ಅರ್ಥೈಸಿಕೊಳ್ಳಬಹುದಾದ ರಚನೆಗಳು.ವಚನಗಳ ಸಾರ್ಥಕತೆ ಇರುವುದು ಅವು ನಮ್ಮಲ್ಲಿ ಉಂಟು ಮಾಡುವ ಮಾನವೀಯ ಫಲಿತಗಳಲ್ಲಿ.ನಮ್ಮ ಹಿಂದಿನ ವಚನಕಾರರು ಸಾಹಿತ್ಯ ಬರೆಯಬೇಕೆಂದು ಹೊರಟವರಲ್ಲ. ಸಾಹಿತ್ಯದಿಂದ ಕೀರ್ತಿ,ಹೆಸರು ಪಡೆಯಬೇಕೆಂದೂ ಹೊರಟವರಲ್ಲ.ಅವರ ಮುಖ್ಯ ಉದ್ದೇಶ ಮನುಷ್ಯರ ನಡೆ ನುಡಿಯಲ್ಲಿ ಸತ್ಯ ,ಪ್ರಾಮಾಣಿಕತೆ, ಶ್ರದ್ದೆ,ಕಾಯಕ ನಿಷ್ಠೆ ಒಡಮೂಡಿಸುವದಾಗಿತ್ತು.ಜೊತೆಗೆ ತಮ್ಮ ರಚನೆಗಳ ಮೂಲಕ ಸಮಾಜಮುಖಿ ಚಿಂತನೆಯನ್ನು ವ್ಯಾಪಕಗೊಳಿಸುವದಾಗಿತ್ತು. ನಮ್ಮ ಹಿಂದಿನ ವಚನಕಾರರು ಜನಸಾಮಾನ್ಯರ ನೆಲೆಯಿಂದ ಉದಿಸಿ ಬಂದವರು.ತಮ್ಮ ಕಾಯಕದೊಂದಿಗೆ ಗುರುತಿಸಿಕೊಂಡವರು.ಯಾವ ಬೇಧ ಭಾವವಿಲ್ಲದೇ ಸಿರಿವಂತ-ಬಡವ,ದೊಡ್ಡವ-ಸಣ್ಣವ, ಕಪ್ಪು-ಬಿಳಿಯ,ಮೇಲ್ಜಾತಿ-ಕೆಳಜಾತಿ ಎಂಬ ಮಾನವ ವಿರೋಧಿ ತಾರತಮ್ಯವನ್ನು ಮೀರಿ ಬರೆದವರು,ಬೆರತವರು ಹಾಗೂ ಬೆಳೆದವರು.ನಮ್ಮ ವಚನಕಾರರು ಅವರು ಬರೆದ ಅಂದಿನ ರಚನೆಗಳು ಇಂದು ಕನ್ನಡ ಸಾಹಿತ್ಯದ ಶ್ರೇಷ್ಠತೆಯ ಮಾದರಿಗಳಾಗಿವೆ.ಜಗತ್ತಿನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಏನು ? ಎಂಬ ಪ್ರಶ್ನೆಗೆ ವಚನಗಳೇ ಉತ್ತರಗಳಾಗಿವೆ. ಇಂಥ ಮಾನವೀಯ ನೆಲೆಯ ರಚನೆಗಳನ್ನು ನಮಗೆ ಧಾರೆ ಎರೆದ ನಮ್ಮ ವಚನಕಾರರ ನಡೆಗೆ ನಮ್ಮ ಋಣವನ್ನು ತೀರಿಸುವದಾದರೆ ಅವುಗಳ ಸಂದೇಶವನ್ನು ಬದುಕಿನಲ್ಲಿ ನಾವೂ ಅಳವಡಿಸಿಕೊಂಡು ಇತರರಿಗೆ ಬಿತ್ತರಿಸಬೇಕಾಗಿದೆ.
ಇವತ್ತು ಆಧುನಿಕ ವಚನಕಾರರು ತಮ್ಮ ರಚನೆಗಳ ಕೃಷಿ ಆರಂಭಿಸಿದ್ದಾರೆ.ವಚನಕಾರರು ಅಂಕಿತವನ್ನಿಟ್ಟುಕೊಂಡು ಬರೆಯುವಂತೆ ಇವತ್ತಿನ ನಮ್ಮ ಕಾಲದ ಆಧುನಿಕ ವಚನಕಾರರೂ ಅಂಕಿತವನ್ನಿಟ್ಟುಕೊಂಡು ಬರೆಯುತ್ತಿದ್ದಾರೆ. ವಚನಗಳು ಒಂದು ಬಗೆಯಲ್ಲಿ ನಿರಂತರ ಮತ್ತು ಚಲನಶೀಲತೆಯ ಸಂಕೇತಗಳಾಗಿವೆ, ಹಾಗಾಗಿಯೇ ಯಾವ ಕಾಲಕ್ಕೂ ವಚನ ರಚನೆ ನಿಲ್ಲುವುದಲ್ಲ.ನಮ್ಮ ಆಧುನಿಕ ವಚನಕಾರರ ಸಾಲಿನಲ್ಲಿ ನಮ್ಮ ಯುವ ಕವಿ ಬಿ.ಬಿ.ಬಳಿU್ಫರ ಅವರು ಒಬ್ಬರು.ಅವರದೊಂದು ವಿಶೇಷ ನಡೆ, ವಿಶೇಷ ನುಡಿ.ಅವರ ನುಡಿ ನೆದರು ಕೃತಿಯು ಆಧುನಿಕ ವಚನಗಳ ರಚನೆಯ ಸಂದರ್ಭದಲ್ಲಿ ಒಂದು ವಿನೂತನ ಮಾದರಿಯನ್ನು ಹುಟ್ಟು ಹಾಕಿದೆ.ಕನ್ನಡದ ಶಬ್ದ ಚಮತ್ಕಾರಿಕೆ, ಪದ ಜೋಡನೆ,ನುಡಿಗಟ್ಟು ,ನಾಣ್ನುಡಿ, ಅರ್ಥ-ಭಾವಾರ್ಥ ಲಯಗಾರಿಕೆಯಿಂದ ಇಲ್ಲಿನ ಎಲ್ಲ ವಚನಗಳೂ ವಿಶಿಷ್ಟವೆನ್ನಿಸುತ್ತಿವೆ.
’ರಟ್ಟ ಮಂಡಲವಾಸ ಕವಿಕುಮಾರ ಬಸವ’ ಅಂಕಿತದಲ್ಲಿ ಬರೆಯತ್ತಿರುವ ಬಿ.ಬಿ.ಬಳಿಗಾರ ಅವರು ಆಧುನಿಕ ವಚನಗಳಲ್ಲಿ ತುಂಬಾ ಗಟ್ಟಿಯಾದ ರಚನೆಗಳನ್ನು ನೀಡಿದ್ದಾರೆ.
ಜಾಣ-ತಾಣಗಳ
ಜ್ಞಾನದ ಜಂಭದಲಿ /ಮಾನವ
ಬಳಸಿ ಬಗೆಯದ ಜಲವಾಗಬೇಡೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಬದುಕಿನಲ್ಲಿ ಕಂಡುಕೊಳ್ಳುವ ವಿರೋಧಾಭಾಸಗಳಲ್ಲಿ ಸಂಯಮದ ಮತ್ತು ವರ್ಣವಿಲ್ಲದ ನಡೆಯಲ್ಲಿ ಮಾನವ ರೂಪಿಸಿಕೊಳ್ಳಬೇಕಾದ ನೀತಿಯನ್ನು ಕವಿ ಸಾರಿದ್ದಾರೆ.ಬಳಕೆಗೆ ಸಲ್ಲುವ ಜಲದ ಗುಣವನ್ನು ಬದುಕಿಗೆ ಸಲ್ಲುವ ಗುಣಕ್ಕೆ ಕವಿ ಸಮೀಕರಿಸಿದ್ದಾರೆ.
ಮ್ಯಾಲ-ಕೆಳಗಳ
ಅಸಮತೆಯ ಕೆಂಡದಲ್ಲಿ /ಮಾನವ
ಕಪ್ಪು ಬಿಳಿ ಚರ್ಮದ ಮರ್ಮವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ
ಮೇಲು ಕೀಳುಗಳ ಅಸಮಾನತೆಯ ಪರಿಯಲ್ಲಿ ವರ್ಣಬೇಧ ಉಂಟುಮಾಡುವ ಅಪಾಯದ ಸೂಚನೆಯನ್ನು ಕವಿ ನೀಡಿದ್ದಾರೆ.ಸಮಾನತೆಯ ತತ್ವವನ್ನು ಪ್ರತಿಷ್ಠಾಪಿಸುವ ಸರಳತೆ ಇಲ್ಲಿದೆ.
ಅಕ್ಕ ಪಕ್ಕದ
ಅಕ್ಕರೆಯ ಬದುಕಿನಲಿ /ಮಾನವ
ಪಕ್ವವಾದ ಮನದಿಳೆಯಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಸಹಬಾಳ್ವೆಯ ಸಂದೇಶವನ್ನು ಸಾರುವ ಈ ವಚನ ಮನುಷ್ಯನ ಬದುಕಿನ ಪಕ್ವತೆಗೆ ಕೂಡಿ ಬಾಳುವ ಕೂಡಿ ಉಣ್ಣುವ ಅಗತ್ಯತೆಯನ್ನು ಮನಗಾಣುವುದರೊಂದಿಗೆ ನೆರೆಹೊರೆಯವರೊಂದಿಗೆ ಹೊರೆಯಾಗಿರಬೇಡ ಎಂಬ ನೀತಿ ಸಾರುತ್ತದೆ.
ಹಾಲು-ಪಾಲುಗಳ
ಕಿಚ್ಚಿನ ಕೆಸರಾಟದಲಿ/ ಮಾನವ
ಪಾಲನೆರೆಯುವ ಗಿಡಕಳ್ಳಿಯಾಗಬೇಡೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಜೀವನ ಕಟ್ಟಿಕೊಳ್ಳುವ ದಿಸೆಯಲ್ಲಿ ಬಂದೆರಗುವ ನೋವು ನಲಿವುಗಳ ಸಂದರ್ಭಗಳಲ್ಲಿ ಮಾನವ ಸಂಸ್ಕಾರಗೊಳ್ಳುವ ಹಾಲಾಗಬೇಕೆ ಹೊರತು ಕಳ್ಳಿ ಹಾಲಾಗಬಾರದು ಎಂದು ಸಾರಿದ್ದಾರೆ.
ಮರ-ವರಗಳ
ಮೃತಿಕೆಯ ಸಿರಿಯಲ್ಲಿ /ಮಾನವ
ಸಾಲುಮರದ ತಾಯಿ ತಿಮ್ಮಕ್ಕನಾಗೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಸಾಲು ಮರಗಳನ್ನು ಹಚ್ಚಿ ಮಾದರಿಯಾದ ಸಾಲುಮರದ ತಿಮ್ಮಕ್ಕನ ಆದರ್ಶವನ್ನು ಕವಿ ನೆನಪಿಸುವುದರೊಂದಿಗೆ ಮರಗಳ ಸಿರಿಯಲ್ಲಿ ಬದುಕು ಕಟ್ಟಿಕೊಳ್ಳಲು ಆಶಿಸುತ್ತಾರೆ.
ರಟ್ಟೆ ತಟ್ಟೆಗಳ
ಮೇಲಣ ಆಪೋಶನದಲ್ಲಿ/ಮಾನವ
ಮಡಗಿದ ಶರಣರ ಕಾಯಕವಿದೆ ಎಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಕಾಯಕದ ಮಹತಿಯನ್ನು ಸಾರುವ ಈ ವಚನವು ಶ್ರಮ ಸಂಸ್ಸøತಿಯ ಹಿರಿಮೆಯನ್ನು ಎತ್ತಿ ಹಿಡಿದಿದೆ.
ರಟ್ಟೆ ತಟ್ಟೆಗಳ ಪದಗಳಲ್ಲಿಯೇ ಶ್ರಮ ಮತ್ತು ಉಪಭೋಗದ ಆಶಯವಿದೆ. ಶರಣರ ಕಾಯಕದ ಮಾದರಿ ಇಂದೂ ನಮ್ಮ ಅಗತ್ಯವಾಗಿದೆ. ದುಡಿಯದೇ ಏನನ್ನೂ ಬಯಸಬಾರದು,ದುಡಿಮೆಯೇ ಬದುಕಿನ ಸತ್ಯವಾಗಬೇಕೆಂಬ ಆಶಯ ಈ ವಚನ ಹೊತ್ತಿದೆ.
ಬಿಸಿ-ತಂಪುಗಳ
ತರಗಲೆಯ ಚಕ್ರದಲಿ / ಮಾನವ
ಕಾಲನ ಕಾಲಚಕ್ರದ ಧರ್ಮವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಬಿಸಿ-ತಂಪು,ನೆರಳು-ಬೆಳಕು,ನೋವು-ನಲಿವು,ಸುಖ-ದುಃಖ ಇವೆಲ್ಲ ಕಾಲನ ನಡೆಯಲ್ಲಿ ಚಕ್ರದ ಗುರುತುಗಳು.ತರಗಲೆಯಂತೆ ಉದುರಿ ಹೋಗುವ ಮನುಷ್ಯ ಜೀವನದಲ್ಲಿ ಬಂದೊದಗುವ ಇಂಥ ಆಕಸ್ಮಿಕಗಳಿಗೆ ಕೊನೆ ಎಲ್ಲಿದೆ? ಇಂಥ ಚಿಂತನೆಗಳನ್ನು ವಚನ ತೂರಿಬಿಡುತ್ತದೆ.
ತಿಂಡಿ-ತಿನಿಸುಗಳ
ಕ್ರಮದ ಬಳಕೆಯಲಿ / ಮಾನವ
ಪುರಾಣದ ಬಕನಳಿಯಬೇಕೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಮನುಷ್ಯನ ಆರೋಗ್ಯವು ಆಹಾರ ಮತ್ತು ಅದರ ಕ್ರಮದ ಮೇಲೆ ನಿಂತಿದೆ.ತಿಂಡಿ ತಿನಿಸುಗಳ ಬಳಕೆಯಲ್ಲಿ ಹಿತ ಮಿತವಿರಬೇಕೆಂಬ ಆಶಯ ಈ ವಚನ ಬಿಂಬಿಸುತ್ತದೆ.ಪುರಾಣ ಕಾಲದ ಬಕಗಳಿಯಬೇಕೆಂಬಲ್ಲಿ ಆರೋಗ್ಯದ ಸೂತ್ರ ಅಡಗಿದೆ.
ತಾಗು- ಬಾಗುಗಳ
ಘನದ ನಡಿಗೆಯಲಿ / ಮಾನವ
ಸದಾಶಿವನಿಗೊಲಿದ ಸದುವಿನಯವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ವಿನಯ ಮತ್ತು ಸಜ್ಜನಿಕೆಗಳು ಮನುಷ್ಯನನ್ನು ದೊಡ್ಡವರನ್ನಾಗಿ ಮಾಡುತ್ತವೆ.ಮತ್ತು ತನ್ನ ಆರೋಗ್ಯವನ್ನು ಆ ಮೂಲಕ ಕುಟುಂಬದ ಮತ್ತು ಸಮಾಜದ ಆರೋಗ್ಯವನ್ನೂ ಕಾಯುತ್ತದೆ.ಸದಾಶಿವನಿಗೆ ಒಲಿದ ಸದುವಿನಯವನ್ನು ಮಾನವ ಹೊಂದಬೇಕೆಂಬ ಕಳಕಳಿ ಇಲ್ಲಿದೆ.
ಹೀಗೆ ಬದುಕಿನ ಸಾರ್ಥಕತೆಯನ್ನು ನಿರೂಪಿಸುವ ಇಲ್ಲಿನ ವಚನಗಳು ತುಂಬಾ ಮೌಲಿಕವಾಗಿವೆ.ಕವಿ ಬಿ.ಬಿ.ಬಳಿಗಾರ ಅವರು ತಮ್ಮ ವಚನಗಳ ಮೂಲಕ ಹೊಸ ಹೊಸ ಶಬ್ದಗಳ ಪ್ರಯೋಗ ಮಾಡಿದ್ದಾರೆ,ಇಂಥ ಪ್ರಯೋಗಗಳಿಂದ ಕನ್ನಡ ಶಬ್ದ ಭಂಡಾರವನ್ನು ವಿಸ್ತರಿಸುವ ಕೆಲಸ ನಡೆದಿದೆ.
ಬಳಿಗಾರರ ವಚನಗಳು ಶೈಲಿ,ರೂಪ,ಪದಜೋಡನೆ,ಅರ್ಥವಂತಿಕೆಯಿಂದ ಗುರುತಿಸಿಕೊಳ್ಳುತ್ತವೆ. ಆದಿ ಪ್ರಾಸ,ಅಂತ್ಯಪ್ರಾಸಗಳಿಂದ ಕೂಡಿದ ಬಹಳಷ್ಟು ವಚನಗಳು ಲಯಗಾರಿಕೆಗೆ ಹತ್ತಿರವಾಗಿವೆ. ಕೆಲವಡೆ ರಚನೆ ಕ್ಲಿಷ್ಟವಾಗಿ ಕಂಡರೂ ಅವು ಸ್ಪುರಿಸುವ ಅರ್ಥದಿಂದ ಹತ್ತಿರವಾಗುತ್ತವೆ.ಶಬ್ದಗಳ ಹುಡುಕಾಟದಲ್ಲಿ ಸೋಲುವ ಅರ್ಥದ ಭಾವ ತುಂಬಿಕೊಳ್ಳುವ ಪರಿಯಲ್ಲಿ ಕವಿಯ ಯತ್ನ ಸಾಲದಾಗುತ್ತದೆ. ಒಟ್ಟಾರೆಯಾಗಿ ಬಳಿಗಾರರ ವಚನಗಳು ದ್ವಿರುಕ್ತಿ,ಜೋಡು ನುಡಿ ,ನುಡಿಗಟ್ಟುಗಳ ವಿಶಿಷ್ಟ ಹೆಣಿಕೆಯಿಂದ ರಚನೆಯಾಗಿ ಕನ್ನಡ ಆಧುನಿಕ ವಚನಗಳ ಸಾಲಿಗೆ ಹೊಸ ಬೆಳೆಯನ್ನು ನೀಡಿವೆ.
ಅಧ್ಯಾಪಕರಾಗಿ ಮಕ್ಕಳಿಗೆ ಪಾಠ ಮಾಡುತ್ತ ಆಧುನಿಕ ವಚನಗಳ ಮೂಲಕ ಕನ್ನಡ ಸಾರಸ್ವತ ಲೋಕದ ಉಡಿತುಂಬುತ್ತಿರುವ ಬಳಿಗಾರ ಅವರು ಅಭಿನಂದನಾರ್ಹರು.ದೇಸಿ ನೆಲೆಗಟ್ಟಿನಲ್ಲಿ ತನ್ನ ಭಾಷೆಯ ಕಸುವನ್ನು ವಚನ ರಚನೆಗಳಲ್ಲಿ ತುಂಬಿಕೊಟ್ಟು ಒಂದು ಸಾರ್ಥಕ ಕಾರ್ಯವನ್ನು ಕವಿ ಮಾಡಿದ್ದಾರೆ.ಅಲ್ಲಲ್ಲಿ ಅನುಭಾವದ ಸೆಳಕುಗಳು, ಬಳಕೆಗೆ ಸಿಕ್ಕುವ ಪದಗಳು, ಚಮತ್ಕಾರಿಕೆಯ ಅರ್ಥ ಬಿಗಿತನ, ಪರಂಪರೆಯ ಸೆಳಕುಗಳು ,ಪದ ಸರಿಜೋಡಿಸುವ ತಂತ್ರಗಾರಿಕೆ ಮೊದಲಾದವುಗಳಿಂದ ನುಡಿ ನೆದರು ಕೃತಿಯ ರಚನೆಯ ಆಧುನಿಕ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಜೋಡು ಪ್ರಾಸ ಪದಗಳ ಮೋಡಿ ಮಾಡಿ ವಚನ ಕಟ್ಟಿಕೊಟ್ಟ ಬಳಿಗಾರ ಅವರನ್ನು ಅಭಿನಂದಿಸುತ್ತಾ ಅವರ ಕಾವ್ಯ ಕೃಷಿ ಮುಂದುವರಿಯಲಿ, ಅವರ ಕೃತಿಗಳನ್ನು ಓದುವ ಬಳಗ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಮುನ್ನುಡಿಯ ಈ ಸಾಲುಗಳಿಗೆ ವಿರಾಮ ಹೇಳುತ್ತೇನೆ.
-ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ
